ಕೆರೆಗೆ ಬಿದ್ದು ಮೃತ್ಯು
ಕುಂದಾಪುರ, ಜು.8: ಹೆಮ್ಮಾಡಿ ಗ್ರಾಮದ ಕಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ನೂಜಾಡಿ ಗ್ರಾಮದ ಬಗ್ವಾಡಿ ಕ್ರಾಸ್ನ ವಿಜಯ ಪೂಜಾರಿ(48) ಎಂದು ಗುರುತಿಸಲಾಗಿದೆ.
ಇವರು ತನ್ನ ಮನೆಯ ಬಳಿ ಕೆರೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಇಕ್ಕಟ್ಟಾದ ಗದ್ದೆಯ ಅಂಚಿನಲ್ಲಿ ಕಾಲು ಜಾರಿ ಆಯತಪ್ಪಿ ಕರೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story