ಸಚಿವರಿಂದ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ವೀಕ್ಷಣೆ
ಉಡುಪಿ, ಜು.18: ಅಂಬಲಪಾಡಿ ಕಪ್ಪೆಟ್ಟುವಿನಲ್ಲಿ ಸುಮಾರು 38ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ವೀಕ್ಷಿಸಿದರು.
ಈಗಾಗಲೇ ಸಮುದಾಯ ಭವನ ಕಾಮಗಾರಿಗೆ ಸರಕಾರದಿಂದ 10ಲಕ್ಷ ರೂ., ಸಂಸದರ ನಿಧಿಯಿಂದ ಎರಡೂವರೆ ಲಕ್ಷ ರೂ. ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ನಿಧಿಯಿಂದ 5 ಲಕ್ಷ ರೂ. ಬಿಡುಗಡೆ ಮಾಡಿ ವ್ಯಯಿಸಲಾಗಿದೆ. ಇನ್ನು ಸುಮಾರು 30ಲಕ್ಷ ರೂ. ಅನುದಾನದ ಅಗತ್ಯ ವಿದ್ದು, ಇನ್ನು ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಸಮಿತಿಯವರು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ, ನಗರಸಭಾ ಸದಸ್ಯ ಗಣೇಶ್ ನೆರ್ಗಿ, ರಮೇಶ್ ಪಾಲನ್, ದಲಿತ ಮುಖಂಡ ರಾದ ಸುಂದರ್ ಕಪ್ಪೆಟ್ಟು, ಸಮುದಾಯ ಭವನದ ಅಧ್ಯಕ್ಷ ಮಂಜು ನಾಥ್ ಅಮೀನ್ ಕಪ್ಪೆಟ್ಟು, ಸದಸ್ಯರಾದ ಸಂತೋಷ್ ಕಪ್ಪೆಟ್ಟು, ಮಾಧವ ಕಪ್ಪೆಟ್ಟು, ಉದಯ ಕುಮಾರ್ ಕಪ್ಪೆಟ್ಟು, ಕುಮಾರ್ ಕಪ್ಪೆಟ್ಟು, ಜಗನ್ನಾಥ್, ಸತೀಶ್ ಕೆ., ಉಮೇಶ್, ರತ್ನಾಕರ್ ಕೆ., ಸುನೀಲ್ ಕುಮಾರ್, ನವೀನ್ ಮೊದಲಾದವರು ಉಪಸ್ಥಿತರಿದ್ದರು.