ಆರ್ಟಿಎ ಸಭೆ: ಸಾರ್ವಜನಿಕರಿಂದ ಅರ್ಜಿ ಸ್ವೀಕಾರ
ಮಂಗಳೂರು, ಜು.21: ದ.ಕ.ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯು ಜು.31ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆರ್ಟಿಒ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ ಸಾರ್ವಜನಿಕರು ಸಾರಿಗೆ ಸೌಲಭ್ಯಗಳ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ಜು.26ರೊಳಗೆ ಆರ್ಟಿಒ ಕಚೇರಿಗೆ ಸಲ್ಲಿಸಬಹುದು.
ಅಂತಹ ಅರ್ಜಿಗಳನ್ನು ಸಲ್ಲಿಸಿದವರು ಮಾತ್ರ ಸಭೆಗೆ ಹಾಜರಾಗಬಹುದು ಎಂದು ಆರ್ಟಿಒ ಪ್ರಕಟನೆ ತಿಳಿಸಿದೆ.
Next Story