ಆಧಾರ್ ಕೇಂದ್ರಕ್ಕೆ ಐವನ್ ಭೇಟಿ
ಮಂಗಳೂರು, ಜು.21: ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಮಂಗಳೂರು ಒನ್ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ದೂರು ಆಲಿಸಿದ ಐವನ್ ಡಿಸೋಜ ಸಮಸ್ಯೆ ಕುರಿತು ಮುಖ್ಯಮಂತ್ರಿಯ ಗಮನ ಸೆಳೆಯುವುದಾಗಿ ತಿಳಿಸಿದರು.
ಮಂಗಳೂರು ಒನ್ ಆಧಾರ್ ನೋಂದಣಿ ಕೇಂದ್ರಕ್ಕೆ ಅಭೇಟಿ ನೀಡಿದಾಗ ಅಲ್ಲಿದ್ದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು. 1 ದಿನದಲ್ಲಿ 4 ತಿಂಗಳು ನೋಂದಣಿ ಮಾಡುವಷ್ಟು ಹೆಸರು ನೋಂದಾಯಿಸಲಾಗಿದ್ದು, ಈಗಾಗಲೆ ಅಕ್ಟೋಬರ್ವರೆಗೆ ಹೆಸರು ನೋಂದಣಿಗೆ ಟೋಕನ್ ನೀಡಲಾಗಿದೆ. ಅಲ್ಲದೆ ಪ್ರತೀ ದಿನ ಕೇವಲ ಶೇ.30ರಷ್ಟು ನೋಂದಣಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
Next Story