ಅಡ್ಡೂರು : ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಬಾಲಕ ಮೃತ್ಯು
ಮಂಗಳೂರು, ಜು.23: ನೀರು ತುಂಬಿದ್ದ ಹೊಂಡವೊಂದಕ್ಕೆ ಬಾಲಕನೋರ್ವ ಬಿದ್ದು ಸಾವನ್ನಪ್ಪಿರುವ ಘಟನೆ ರವಿವಾರ ಸಂಜೆ ಅಳಕೆಯ ಫಲ್ಗುಣಿ ನದಿ ಸಮೀಪ ನಡೆದಿದೆ.ಮೃತ ಬಾಲಕನನ್ನು ಅಡ್ಡೂರು ಸಮೀಪದ ನೂಹಿ ಎಂಬಲ್ಲಿನ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಅರ್ಶದ್ (17) ಎಂದು ಗುರುತಿಸಲಾಗಿದೆ. ಈತ ನಗರದ ಮಹೇಶ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ.ಅಳಕೆಯ ಫಲ್ಗುಣಿ ನದಿ ಸಮೀಪದಲ್ಲಿ ಹೊಂಡವೊಂದಿದ್ದು, ಮಳೆಗಾಲ ಇದ್ದುದರಿಂದ ಅದರಲ್ಲಿ ನೀರು ತುಂಬಿತ್ತು. ರವಿವಾರ ಸಂಜೆ ಅರ್ಶದ್ ಮತ್ತಾತನ ಇತರ ನಾಲ್ವರು ಸ್ನೇಹಿತರು ಆಟವಾಡಲೆಂದು ನೀರು ತುಂಬಿದ್ದ ಹೊಂಡದ ಸಮೀಪ ತೆರಳಿದ್ದರು. ಈ ಸಂದರ್ಭದಲ್ಲಿ ಅರ್ಶದ್ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
Next Story