ಮಹಿಳೆಯರ ಆರೋಗ್ಯದ ಕುರಿತ ಉಪನ್ಯಾಸ
ಉಡುಪಿ, ಆ.20:ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ದೌರ್ಜನ್ಯ ನಿಯಂತ್ರಣ ಘಟಕ ಹಾಗೂ ರೋಟರಿ ಕ್ಲಬ್ ಉಡುಪಿ ಮಣಿಪಾಲದ ಜಂಟಿ ಆಶ್ರಯದಲ್ಲಿ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಮಹಿಳೆಯರ ಆರೋಗ್ಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಕಾಲೇಜಿನ ಸೆಮಿನರ್ ಹಾಲ್ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಉಡುಪಿ ಮಣಿಪಾಲ ರೋಟರಿ ಕ್ಲಬ್ ಅಧ್ಯಕ್ಷೆ ಗೀತಂ ಕೌಶಿಕ್ ಉದ್ಘಾಟಿಸಿದರು. ಮಣಿಪಾಲ ಕೆಎಂಸಿಯ ಡಾ.ವಂದಿತಾ ಹಾಗೂ ಆಶಾ ಮಹಿಳೆಯರ ಆರೋಗ್ಯದ ಸಮಸ್ಯೆಗಳು, ಕಾರಣಗಳು, ಸ್ತನ ಕ್ಯಾನ್ಸರ್ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಬಿ.ಜಗದೀಶ್ ರಾವ್ ವಹಿಸಿದ್ದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಶೈಲಾ ರಾವ್ ಉಪಸ್ಥಿತರಿದ್ದರು. ದೌರ್ಜನ್ಯ ನಿಯಂತ್ರಣ ಘಟಕದ ಸಂಚಾಲಕಿ ಪ್ರೊ.ಗೌರಿ ಭಟ್ ಸ್ವಾಗತಿಸಿದರು. ಜಯ ಲಕ್ಷ್ಮೀ ವಂದಿಸಿದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.
Next Story