ಆ. 21: ಫರಂಗಿಪೇಟೆಯಲ್ಲಿ ’ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ’ ಅಭಿಯಾನ
ಬಂಟ್ವಾಳ, ಆ. 20: ಸೋಷಿಯಲ್ ಡೆಮಾಕ್ರಟಿಕ್ ಆರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ’ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ’ ಅಭಿಯಾನದ ಪ್ರಯುಕ್ತ ಆ. 21ರಂದು 4:30ಕ್ಕೆ ಫರಂಗಿಪೇಟೆಯಲ್ಲಿ ಸಿಟಿ ಸೆಂಟರ್ ಎದುರು ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶಾಫಿ ಬೆಳ್ಳಾರೆ, ಅಕ್ರಮ್ ಹಸನ್, ಆನಂದ ಮಿತ್ತಬೈಲ್, ಜಾಫರ್ ಫೈಝಿ ಸಹಿತ ಎಸ್ಡಿಪಿಐ ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story