ಉದ್ಯಾವರ: ಚರಿತ್ರೆಯ ಸಂರಕ್ಷಣೆ ಮತ್ತು ಅನ್ವೇಷಣೆ
ಉದ್ಯಾವರ, ಆ.22: ತುಳುನಾಡಿನ ಪ್ರಾಚೀನ ರಾಜಧಾನಿ, ಉದ್ಯಾವರದಲ್ಲಿ ಶಿರ್ವದ ಮುಲ್ಕಿ ಸುಂದರ ರಾವ್ ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳು ‘ಐತಿಹಾಸಿಕ ಪರಂಪರೆ ಉಳಿಸಿ’ ಸಪ್ತಾಹದ ಅಂಗವಾಗಿ ಚೊಂಬುಕಲ್ಲು ವೀರದ್ರ ದೇವಾಲಯದ ಆವರಣದಲ್ಲಿರುವ 10 ಶಾಸನಗಳನ್ನು ಶುಚಿಗೊಳಿಸುವ ಮೂಲಕ ಚರಿತ್ರೆಯ ಸಂರಕ್ಷಣೆ ಹಾಗೂ ಅನ್ವೇಷಣೆಯ ಪ್ರಾಥಮಿಕ ಅನುಭವ ಗಳನ್ನು ಪಡೆದುಕೊಂಡರು.
ಕಾಲೇಜಿನ ಪುರಾತತ್ವ ಅಧ್ಯಯನ ವಿಭಾಗದ ಪ್ರೊ.ಟಿ.ಮುರುಗೇಶಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಾಸನಗಳನ್ನು ಶುಚಿಗೊಳಿಸಿ, ಅವುಗಳ ಪ್ರತಿ ಮಾಡಿ, ಶಾಸನಗಳ ಸಂರಕ್ಷಣೆಯ ಮೂಲಕ ಚರಿತ್ರೆಯ ಸಂರಕ್ಷಣೆ, ಚರಿತ್ರೆಯ ಸಂರಕ್ಷಣೆಯ ಮೂಲಕ ಚರಿತ್ರೆಯ ಅನ್ವೇಷಣೆ ನಡೆಸುವುದನ್ನು ಅಭ್ಯಸಿಸಿದರು.
ಇದೇ ಸಂದರ್ದಲ್ಲಿ ಅಲ್ಲಿನ ಸಾರ್ವಜನಿಕರಿಗೆ, ಶಾಸನ ಅಧ್ಯಯನ ಮತ್ತು ಸಂರಕ್ಷಣೆಯ ಮಹತ್ವವನ್ನು ಮನವರಿಕೆ ಮಾಡಿಕೊಡಲಾಯಿತು. ಸುಮಾರು 1000 ವರ್ಷಗಳಿಗೂ ಮೇಲ್ಪಟ್ಟು ತುಳುನಾಡನ್ನು ಆಳಿದ ಆಳುಪ ರಾಜಮನೆ ತನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.
Next Story