ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ನಿಂದ ಸೈಕಲ್ ಜಾಥಾ
ಉಳ್ಳಾಲ, ಫೆ.24: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ 'ಭಯೋತ್ಪಾದನೆ ವಿರುದ್ಧ ಜಿಹಾದ್' ಆಂದೋಲನದ ಭಾಗವಾಗಿ ಎಸ್ಬಿಎಸ್ ಉಳ್ಳಾಲ ವಲಯ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾವು ಸೆಕ್ಟರ್ ಕಾರ್ಯದರ್ಶಿ ಖುಬೈಬ್ ತಂಙಳ್ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಯೂಸುಫ್ ಮುಸ್ಲಿಯಾರ್ ದುಆ ಮಾಡಿದರು.ಆರ್.ಕೆ. ಮದನಿ ಅಮ್ಮೆಂಬಳ ಕಾರ್ಯಕ್ರಮ ಉದ್ಘಾಟಿಸಿದರು.ಮುನೀರ್ ಸಖಾಫಿ ಉಳ್ಳಾಲ ಸಂದೇಶ ಭಾಷಣ ಮಾಡಿದರು.
ಅಸ್ಲಂ ಅಕ್ಕರೆಕೆರೆ, ಫಾರೂಕ್ ಹಿಬಃ, ತಾಜುದ್ದೀನ್ ಹಳೆಕೋಟೆ, ನಿಝಾಮುದ್ದೀನ್ ಕೋಟೆಪುರ, ಸತ್ತಾರ್ ಮೇಲಂಗಡಿ ಉಪಸ್ಥಿತರಿದ್ದರು. ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಮುಸ್ತಫಾ ಮಾಸ್ಟರ್ ಉಳ್ಳಾಲ ವಂದಿಸಿದರು.
Next Story