ಮಂಗಳೂರು: ಹಜ್ಜಾಜ್ ಗಳ ಕೊನೆಯ ತಂಡ ಆಗಮನ
ಮಂಗಳೂರು, ಸೆ.9: ಕೇಂದ್ರ ಹಜ್ ಕಮಿಟಿ ಮೂಲಕ ರಾಜ್ಯದಿಂದ ಹಜ್ ಯಾತ್ರೆ ಕೈಗೊಂಡ ಯಾತ್ರಿಕರ ಕೊನೆಯ ತಂಡ ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಇಂದು ಬೆಳಗ್ಗೆ ಸುಮಾರು 6:30ಕ್ಕೆ ವಿಮಾನ ಬಂದಿಳಿದಿದ್ದು, 5ನೆ ಹಾಗೂ ಕೊನೆಯ ತಂಡದಲ್ಲಿ 139 ಮಂದಿ ಯಾತ್ರಾರ್ಥಿಗಳಿದ್ದರು. ಹಜ್ ಯಾತ್ರೆ ಮುಗಿಸಿದ 5 ತಂಡಗಳಲ್ಲಿ ಒಟ್ಟು 769 ಮಂದಿ ಯಾತ್ರಾರ್ಥಿಗಳು ಮಂಗಳೂರಿಗೆ ತಲುಪಿದ್ದಾರೆ.
ಈ ಸಂದರ್ಭ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ಸಿ. ಮಹ್ಮೂದ್ ಹಾಜಿ, ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಬಶೀರ್ ಅಹ್ಮದ್ ಜೆಪ್ಪು, ಸಿ.ಎಚ್. ಉಳ್ಳಾಲ್, ಮಹಮೂದ್ ಹಾಜಿ ಬಂದರ್, ರಾಜ್ಯ ಹಜ್ ಸಮಿತಿಯ ಅಧಿಕಾರಿಗಳಾದ ಫೈರೋಝ್ ಬಾಷಾ, ಮುನೀರ್ ಪಾಶ, ವಕ್ಫ್ ಅಧಿಕಾರಿ ಅಬೂಬಕರ್ ಹಾಜಿ, ಅಹ್ಮದ್ ಬಾವ ಪಡೀಲ್ , ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ರಫೀಕ್ ಹಾಜಿ, ಸುಲೈಮಾನ್ ಕರಾಯ ಮೊದಲಾದವರು ಉಪಸ್ಥಿತರಿದ್ದರು.
Next Story