ವಿದ್ಯಾರ್ಥಿ ನಾಪತ್ತೆ
ಕೋಟ, ಸೆ.19: ಅಚಲಾಡಿ ಗ್ರಾಮದ ಮಧುವನ ಶಾಂತಿನಗರದ ರವಿ ಭಂಡಾರಿ ಎಂಬವರ ಮಗ ಸ್ವಸ್ತಿಕ್ ಭಂಡಾರಿ (17) ಎಂಬಾತ ಸೆ.18ರಂದು ಬೆಳಗ್ಗೆ ಮನೆಯಿಂದ ಕೋಟ ಹೈಸ್ಕೂಲ್ಗೆ ಹೋಗುವುದಾಗಿ ಹೇಳಿ ಶಾಲಾ ಸಮವಸ್ತ್ರ, ಸ್ಕೂಲ್ ಬ್ಯಾಗ್ ಹಾಗೂ ಬ್ಯಾಂಕ್ ಪಾಸ್ಪುಸ್ತಕ ತೆಗೆದುಕೊಂಡು ಹೋದವನು ಸಂಜೆಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story