ನಿವೇಶನಕ್ಕೆ ಅರ್ಜಿ ಸ್ವೀಕಾರ
ಕುಂದಾಪುರ, ಸೆ.20: ಬೈಂದೂರು, ತಗ್ಗರ್ಸೆ ಮತ್ತು ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಗಳ ನೇತೃತ್ವದಲ್ಲಿ ಬೈಂದೂರು, ತಗ್ಗರ್ಸೆ, ಯಡ್ತರೆ ಗ್ರಾಮಗಳ ಬಡನಿವೇಶನ ರಹಿತರಿಂದ ನಿವೇಶನ ಹಕ್ಕು ಪತ್ರ ಕೋರಿ ಅರ್ಜಿಗಳನ್ನು ಬೈಂದೂರು ಸಿಐಟಿಯು ಕಛೇರಿಯಲ್ಲಿ ಸೆ.23ರಿಂದ 26ರವರೆಗೆ ಬೆಳಿಗ್ಗೆ 10ರಿಂದ ಸಂಜೆ ಗಂಟೆ 5ರ ತನಕ ಸ್ವೀಕರಿಸಲಾಗುವುದು ಎಂದು ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story