ಅ. 4ರ ಅಮಿತ್ ಶಾ ಮಂಗಳೂರು, ಕೇರಳ ರ್ಯಾಲಿ ರದ್ದು
ಕೇರಳಕ್ಕೆ ಆದಿತ್ಯನಾಥ್
ಮಂಗಳೂರು, ಅ.3: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಿಗದಿತ ದ.ಕ. ಜಿಲ್ಲಾ ಹಾಗೂ ಕೇರಳ ರಾಜ್ಯ ರ್ಯಾಲಿಯ ಕಾರ್ಯಕ್ರಮ ಅನಿವಾರ್ಯ ಕಾರಣ ಗಳಿಗಾಗಿ ರದ್ದು ಪಡಿಸಲಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಅ. 4ರಂದು ಟಿಎಂಪೈ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಷಾ ಭಾಗವಹಿಸಲು ನಿಗದಿಯಾಗಿದ್ದ ಕಾರ್ಯಕ್ರಮ ಮತ್ತು ಕೇರಳದಲ್ಲಿ ರ್ಯಾಲಿಯಲ್ಲಿ ಭಾಗವಹಿಸಲು ಮಂಗಳವಾರ ನಗರಕ್ಕೆ ಆಗಮಿಸಿ ಕೇರಳಕ್ಕೆ ತೆರಳಿದ್ದ ಅವರು ದೆಹಲಿಯಲ್ಲಿ ತುರ್ತು ಕಾರ್ಯಕ್ರಮ ನಿಮಿತ್ತ ಅವರು ಮಂಗಳವಾರ ಮರಳಲಿದ್ದಾರೆ. ಆದುದರಿಂದ ಕೇರಳದಲ್ಲಿ ಅ. 5 ಮತ್ತು 6ರಂದು ಅಮಿತ್ ಶಾ ರ್ಯಾಲಿಯಲ್ಲಿ ಭಾಗವಹಿಸುವ ಕಾರ್ಯಕ್ರಮ ನಿಗದಿಯಾಗಿತ್ತು.
ಅಮಿತ್ ಶಾ ಅವರ ಕಾರ್ಯಕ್ರಮ ರದ್ದಾಗಿರುವ ಹಿನ್ನೆಲೆಯಲ್ಲಿ ಕೇರಳದ ರ್ಯಾಲಿಯಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಇಂದು ಮಂಗಳೂರಿಗೆ ಆಗಮಿಸಿ ಕೇರಳಕ್ಕೆ ತೆರಳಿದ್ದಾರೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್, ಮಾಜಿ ಶಾಸಕ ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡ ಉಮಾನಾಥ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.