ಅಕ್ರಮ ಮರಳು ಸಾಗಣೆ: ಆರೋಪಿ ಬಂಧನ
ಕೊಳ್ಳೇಗಾಲ, ನ.23: ಕಾವೇರಿ ನದಿಯ ತೀರದಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಣೆ ಮಾಡುತ್ತಿದವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿ, ಟ್ರ್ಯಾಕ್ಟರ್ನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಸತ್ತೇಗಾಲ ಗ್ರಾಮದ ಗುರುಮಲ್ಲು(35) ಎಂಬಾತನು ಬಂಧಿತ ಆರೋಪಿ.
ಗುರುವಾರ ಸತ್ತೇಗಾಲದ ಕಾವೇರಿ ನದಿಯ ತೀರದಲ್ಲಿ ಗುರುಮಲ್ಲು ಎಂಬಾತನು ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಣೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ವನರಾಜು ಹಾಗೂ ಸಿಬ್ಬಂದಿಗಳು ತೆರಳಿ ಆರೋಪಿ ಹಾಗೂ ಟ್ರ್ಯಾಕ್ಟರ್ನ್ನು ವಶಪಡಿಸಿಕೊಂಡಿದ್ದಾರೆ.
Next Story