ಪಿಎಫ್ಐ ಯಿಂದ ಬಿಜೆಪಿಯ ಶವ ಯಾತ್ರೆ
ಚಿಕ್ಕಮಗಳೂರು, ಜ.15 : ಬಿಜೆಪಿ ಯವರ ಅಧಿಕಾರ ದಾಹಕ್ಕೆ ಇನ್ನೆಷ್ಟು ಬಲಿ ಪಡೆಯಬೇಕು ಎಂದು ಪ್ರಶ್ನಿಸಿ ಬಿಜೆಪಿಯ ಶವ ಯಾತ್ರೆ ನಡೆಸುವ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಸೋಮವಾರ ಸಂಜೆ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಬಿಜೆಪಿಗರು ಹೆಣದ ಮುಂದೆ ರಾಜಕೀಯ ನಡೆಸುತ್ತಿದ್ದಾರೆ. ಸತ್ತವರನ್ನು ತಮ್ಮ ಕಾರ್ಯಕರ್ತರು ಎನ್ನುವ ಬಿಜೆಪಿಗರು ಹಲ್ಲೆ, ಕೊಲೆ, ಅತ್ಯಾಚಾರ ಮಾಡುವ ತಮ್ಮದೇ ಪಕ್ಷದ ಕಾರ್ಯಕರ್ತರನ್ನು ದುಷ್ಕರ್ಮಿಗಳು ಎಂದು ಜನರ ದಾರಿ ತಪ್ಪಿಸುತಿದ್ದಾರೆ. ಪ್ರಚೋಧನೆ ಮೂಲಕ ರಾಜ್ಯದಲ್ಲಿ ಅಶಾಂತಿ ನಡೆಸಿ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಅಬ್ದುಲ್ ಅಝೀಝ್, ಸೈಯ್ಯದ್ ಅಜ್ಮತ್, ತಬಾರಕ್ ಮತ್ತಿತರರಿದ್ದರು.
Next Story