ವಿದ್ಯುತ್ ತಂತಿ ಸ್ಪರ್ಶ : ವ್ಯಕ್ತಿ ಮೃತ್ಯು
ಮಡಿಕೇರಿ ಜ.18: ಅಡಿಕೆ ಕೊಯ್ಯುವ ಸಂದರ್ಭ ಅಲ್ಯುಮಿನಿಯಂ ಪೈಪ್ ವಿದ್ಯುತ್ ತಂತಿಗೆ ಸ್ಪರ್ಶ ಗೊಂಡು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿ ಸಮೀಪ ಬೆಟ್ಟಗೇರಿಯಲ್ಲಿ ನಡೆದಿದೆ.
ಮೃತರನ್ನು ಕಟ್ರತಂಡ ರಮೇಶ್ ಮುತ್ತಪ್ಪ ಎಂದು ಗುರುತಿಸಲಾಗಿದೆ.
ತಮ್ಮ ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದ ಸಂದರ್ಭ ತಾವು ಹಿಡಿದಿದ್ದ ಪೈಪ್ 11 ಕೆವಿ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಸ್ಪರ್ಶ ಗೊಂಡು ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story