ಅನಂತಕುಮಾರ್ ಹೆಗಡೆ ಹುಚ್ಚು ನಾಯಿಗಿಂತ ಕಡೆ: ಪ್ರೊ.ಕೆ.ಎಸ್.ಭಗವಾನ್
ಮೈಸೂರು,ಜ.23: ಹೋರಾಟಗಾರರನ್ನು ನಾಯಿಗಳು ಎಂದಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹುಚ್ಚು ನಾಯಿಗಿಂತ ಕಡೆ. ಈ ಹುಚ್ಚು ನಾಯಿಯನ್ನು ಕಂಡಲ್ಲಿ ಹೋರಾಟಗಾರರು ಸದೆ ಬಡಿಯಿರಿ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿ ಕ್ಷಮೆ ಕೇಳಿದ್ದರೂ ಹುಚ್ಚುಚ್ಚಾಗಿ ಮಾತನಾಡುತ್ತಿರುವುದು ನೋಡಿದರೆ ಅವರಿಗೆ ಹುಚ್ಚು ಹೆಚ್ಚಾದಂತೆ ಕಾಣುತ್ತದೆ. ಇಂತಹ ಹುಚ್ಚು ನಾಯಿಗಳನ್ನು ಸಮಾಜದಲ್ಲಿ ಇಟ್ಟುಕೊಂಡರೆ ಅಪಾಯವೇ ಹೆಚ್ಚು . ಹಾಗಾಗಿ ಹೋರಾಟಗಾರರು ಈ ಅನಂತಕುಮಾರ್ ಹೆಗಡೆಯಂತಹ ಹುಚ್ಚುನಾಯಿಯನ್ನು ಕಂಡಲ್ಲಿ ಸದೆ ಬಡಿಯಬೇಕಾಗಿದೆ ಎಂದು ಹೇಳಿದರು.
ಸಂವಿಧಾನದ ಹೆಸರಿನಲ್ಲಿ ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಆದರೆ ಪವಿತ್ರ ಸಂವಿಧಾನದ ಬಗ್ಗೆಯೇ ಮಾತನಾಡುವುದು ಇವರ ಬೇಜವಾಬ್ದಾರಿ ಹಾಗೂ ಅವಿವೇಕತನ ತೋರಿಸುತ್ತದೆ ಎಂದು ಹೇಳಿದರು.
ಸಂವಿಧಾನ ಬಲಿಸಿಬೇಕು ಎಂಬ ಇಚ್ಛೆ ಅವರಿಗೆ ಇದ್ದರೆ, ಕೇಂದ್ರ ಸರ್ಕಾರವನ್ನು ವಿಸರ್ಜಿಸಲಿ. ನಂತರ ಸಂವಿಧಾನ ಬದಲಾಯಿಸಬೇಕು ಎಂದು ಸಂಘಟನೆ ಮಾಡಿ ಚುನಾವಣೆಗೆ ಹೋಗಲಿ. ಜನ ಒಪ್ಪಿಗೆ ಕೊಟ್ವರೆ ಬದಲಾಯಿಸಲಿ. ಇಲ್ಲದಿದ್ದರೆ ತೆಪ್ಪಗೆ ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ಹೇಳಿದರು.