ಮಡಿಕೇರಿ: ಹರೀಶ್ ಬೋಪಣ್ಣಗೆ ಸನ್ಮಾನ
ಮಡಿಕೇರಿ,ಫೆ.20: ಜಿಲ್ಲಾ ಕಾರಾಗೃಹದ ಸಂದರ್ಶಕರ ಮಂಡಳಿಯ ನಾಮ ನಿರ್ದೇಶಿತ ಸದಸ್ಯರಾದ ಸಿ.ಎ.ಶ್ಯಾಂಕುಮಾರ್ ಹಾಗೂ ಎಂ.ಯು.ಹನೀಫ್ ರವರು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನಿಸಿದರು.
ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳಲ್ಲಿ ಹರೀಶ್ ಬೋಪಣ್ಣ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವುದಲ್ಲದೆ ನಮ್ಮನ್ನು ಮಂಡಳಿಗೆ ನಾಮ ನಿರ್ದೇಶನ ಮಾಡಲು ಸಹಕರಿಸುವ ಮೂಲಕ ರಾಜಕೀಯ ಉತ್ಸಾಹವನ್ನು ತುಂಬಿದ್ದಾರೆ ಎಂದು ಹನೀಫ್ ಹಾಗೂ ಶ್ಯಾಂ ಈ ಸಂದರ್ಭ ತಿಳಿಸಿದರು. ಹಾಕತ್ತೂರು ವಲಯ ಕಾಂಗ್ರೆಸ್ ಅದ್ಯಕ್ಷರಾದ ಕೆ.ಜಿ.ಶರೀನ್ ಹಾಜರಿದ್ದರು.
Next Story