ಮಂಡ್ಯ: ನೇತ್ರದಾನದ ಮೂಲಕ ಸಾವಿನಲ್ಲೂ ಅಂಧರಿಗೆ ಬೆಳಕಾದ ಪುಟ್ಟಮ್ಮ
ಮಂಡ್ಯ, ಫೆ.27: ಅನಾರೋಗ್ಯದಿಂದ ಮೃತಪಟ್ಟನಗರದ ನಿವಾಸಿ ಪುಟ್ಟಮ್ಮ ಅವರು ತಮ್ಮ ಎರಡು ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ನಗರಸಭೆ ಇಂಜಿನಿಯರ್ ಸುಬ್ರಹ್ಮಣ್ಯ ಅವರ ತಾಯಿ(73) ಸೋಮವಾರ ನಿಧನರಾಗಿದ್ದು, ಮೃತರ ಮಗ ಸುಬ್ರಹ್ಮಣ್ಯ ಅವರು ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ಗೆ ನೇತ್ರ ಸಂಗ್ರಹಿಸುವಂತೆ ಮನವಿ ಮಾಡಿದರು. ಡಾ.ಯಾಶಿಕಾ ಅನಿಲ್ ನೇತೃತ್ವದ ತಂಡ ಮೃತ ಪುಟ್ಟಮ್ಮ ಅವರ ನೇತ್ರಗಳನ್ನು ಸಂಗ್ರಹಿಸಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ರವಾನಿಸಿತು.
ಕೆಲವೇ ಗಂಟೆಗಳಲ್ಲಿ ನೇತ್ರಗಳು ಇಬ್ಬರು ಅಂಧರ ಬಾಳಿಗೆ ಬೆಳಕಾಗಿವೆ. ಇದರೊಂದಿಗೆ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಸಂಗ್ರಹಿಸಿದ ನೇತ್ರಗಳ ಸಂಖ್ಯೆ 28ಕ್ಕೆ ಏರಿದೆ. ಡಾ.ಯಾಶಿಕಾ ಅನಿಲ್, ದರ್ಶನ್, ವಿನಯ್, ಸಂದೇಶ್ಬಾಬು, ದೇವೇಂದ್ರ ಗುಪ್ತ ಸೇರಿದಂತೆ ಇತರರಿದ್ದರು
Next Story