ಹಾಲಿನ ಬೆಲೆ ಏರಿಕೆ, ರೈತರಿಗೆ ಮೋಸ: ಜ.11ರಂದು ರೈತರಿಂದ ಕೆಎಂಎಫ್ ಮುತ್ತಿಗೆ
ಬೆಂಗಳೂರು, ಜ. 8: ಹಾಲಿನ ಬೆಲೆ ಏರಿಕೆ ಮಾಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಜ.11ರಂದು ಕೆಎಂಎಫ್ಗೆ ಮುತ್ತಿಗೆ ಹಾಕಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿವೆ.
ನಗರದಲ್ಲಿಂದು ಖಾಸಗಿ ಹೊಟೇಲ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಹಾಲಿನ ದರ ಏರಿಸುವ ಮೂಲಕ ಸರಕಾರ ಗ್ರಾಹಕರ ಜೇಬಿಗೂ ಕತ್ತರಿ ಹಾಕಿ, ರೈತರಿಗೂ ಮೋಸ ಮಾಡಿ, ಕೆಎಂಎಫ್ ನಷ್ಟ ಸರಿದೂಗಿಸುವ ಕ್ರಮ ಸರಿಯಲ್ಲ. ಹೆಚ್ಚಳ ಮಾಡಿರುವ ದರವನ್ನು ಸರಕಾರ ಕೂಡಲೇ ಹಾಲು ಉತ್ಪಾದಕರಿಗೆ ನೀಡಬೇಕು ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
Next Story