ಹನೂರು: ನೀರಿನಲ್ಲಿ ಮುಳುಗಿ ಯುವತಿ ಮೃತ್ಯು
ಹನೂರು,ಎ.07: ಹನೂರು ತಾಲೂಕಿನ ಹೂಗ್ಯಂ ಸಮೀಪದ ಯರಂಬಾಡಿ ಜಲಾಶಯದಲ್ಲಿ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರಿನ ಗೌಡನಪಾಳ್ಯದ ನಿವಾಸಿ ನಿಖಿತಾ(19) ಎಂಬವಳೇ ಮೃತಪಟ್ಟ ಯುವತಿ ಎಂದು ತಿಳಿದು ಬಂದಿದೆ.
ಈಕೆ ಶುಕ್ರವಾರ ಮಿಣ್ಯಂ ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿದ್ದು, ಸಂಜೆ 4ರ ವೇಳೆ ಸಮೀಪದ ಯರಂಬಾಡಿ ಗ್ರಾಮದ ಡ್ಯಾಂಗೆ ತನ್ನ 5 ಮಂದಿ ಸ್ನೇಹಿರೊಡನೆ ಸ್ನಾನ ಮಾಡಲು ತೆರಳಿದ್ದಳು. ಈ ವೇಳೆ ತನ್ನ ಜತೆಯಲ್ಲಿದ್ದ ಒಬ್ಬಳು ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಇವಳನ್ನು ರಕ್ಷಿಸಲು ನಿಖಿತಾ ಸೇರಿದಂತೆ ಜತೆಯಲ್ಲಿದ್ದ ನಾಲ್ವರು ನೀರಿಗೆ ಇಳಿದಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ್ದ ಯುವತಿಯನ್ನು ರಕ್ಷಿಸಲು ಸಾಧ್ಯವಾಗದೇ ತೊಂದರೆಗೆ ಸಿಲುಕಿದ್ದ ಯುತಿಯರನ್ನು ಕಂಡ ನಕ್ಕುಂದಿಯ ಶಿವು, ಸುರೇಶ್ ಹಾಗೂ ಶರವಣ ಎಂಬವರು ನೀರಿಗೆ ಧುಮುಕಿ ಐವರು ಯುವತಿಯರನ್ನು ರಕ್ಷಿಸಿದ್ದಾರೆ. ಆದರೆ ನಿಖಿತಾ ಕೆಸರಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಬಳಿಕ ಮೃತದೇಹವನ್ನು ಹೊರಕ್ಕೆ ತರಲಾಯಿತು. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.