ಕೊಳ್ಳೇಗಾಲ: ಎಸ್ಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪುತ್ರ ನೇಣಿಗೆ ಶರಣು
ಕೊಳ್ಳೇಗಾಲ,ಎ.22: ಮಾನಸಿಕ ರೋಗಕ್ಕೆ ತುತ್ತಾಗಿದ್ದ ಚಾ.ನಗರ ಜಿ.ಪಂ ಅಧ್ಯಕ್ಷೆ ಶಿವಮ್ಮ ಹಾಗೂ ಎಸ್ಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣರವರ ಪುತ್ರ ಪ್ರೇಮ್ಕುಮಾರ್(26) ಭಾನುವಾರ ನೇಣಿಗೆ ಶರಣಾಗಿದ್ದಾನೆ.
ತಾಲ್ಲೂಕಿನ ಪಾಳ್ಯ ಗ್ರಾಮದ ತನ್ನ ನಿವಾಸದಲ್ಲೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನ ತಂದೆ ಮತ್ತು ತಾಯಿ ಹನೂರು ಭಾಗದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಮನೆಯಲ್ಲಿ ಅಣ್ಣ ತಮ್ಮ ಮಾತ್ರ ಇದ್ದು, ಅಣ್ಣ ಹೋಟೆಲ್ನಲ್ಲಿ ತಿಂಡಿ ತರಲು ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಒಂಟಿಯಾಗಿದ್ದ ಪ್ರೇಮ್ಕುಮಾರ್ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿಂದೆ ಹಲವಾರು ಬಾರಿ ಮೃತನಿಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎನ್ನಲಾಗಿದೆ.
ಮೃತದೇಹವನ್ನು ಪಾಳ್ಯ ಗ್ರಾಮದಲ್ಲಿ ಶವಸಂಸ್ಕಾರ ನಡೆಸಲಾಯಿತು. ಹನೂರು ಶಾಸಕ ಆರ್.ನರೇಂದ್ರ, ಜಿ.ಪಂ ಸದಸ್ಯ ಬಸವರಾಜು ಹಾಗೂ ಕಾಂಗ್ರೆಸ್ ಮುಖಂಡರಗಳು ಅಂತಿಮ ದರ್ಶನ ಪಡೆದರು.
Next Story