ಚಿಕ್ಕಮಗಳೂರು: ಒಂದೇ ದಿನ 24 ನಾಮಪತ್ರಗಳ ಸಲ್ಲಿಕೆ
ಚಿಕ್ಕಮಗಳೂರು, ಎ.23: ಸೋಮವಾರ ವಿಧಾನಸಭೆ ಚುನಾವಣೆಗೆ ಜಿಲ್ಲೆಯಿಂದ ಸಾಲು ಸಾಲು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್, ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್, ಶಿವಸೇನೆಯಿಂದ ರಂಜಿತ್ ಶೆಟ್ಟಿ, ಎಂ.ಇ.ಪಿ.ಯಿಂದ ನೂರುಲ್ಲಾ ಖಾನ್, ಪಕ್ಷೇತರ ಅಭ್ಯರ್ಥಿಗಳಾಗಿ ಗೋಪಾಲ್ಗೌಡ ಮತ್ತು ತಿಮ್ಮಪ್ಪ ಶೆಟ್ಟಿ ಸೇರಿ 6 ನಾಮಪತ್ರಗಳು ಸಲ್ಲಿಕೆಯಾದವು.
ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿ.ಎಸ್.ಸುರೇಶ್, ಕಾಂಗ್ರೆಸ್ ಪಕ್ಷದಿಂದ ಎಸ್.ಎಂ.ನಾಗರಾಜ್, ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಎಚ್.ಶ್ರೀನಿವಾಸ್, ಡಿ.ಸಿ.ಸುರೇಶ್, ಸಾದಿಕ್ ಪಾಷ, ಕಲೀಲ್ ಅಹ್ಮದ್, ಎಸ್.ಸಿ.ವಾನಿ ಹಾಗೂ ಎ.ಬಿ.ರಾಜ್ಕುಮಾರ್ ಸೇರಿ 8 ಜನ ನಾಮಪತ್ರ ಸಲ್ಲಿಸಿದರು.
ಕಡೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದ್, ಪಕ್ಷೇತರ ಅಭ್ಯರ್ಥಿಗಳಾಗಿ ಶಿವನಂಜಪ್ಪ, ಧನಂಜಯ ಹಾಗೂ ಪ್ರದೀಪ್ ಸೇರಿ 4 ನಾಮಪತ್ರಗಳು ಸಲ್ಲಿಕೆಯಾಗಿವೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಡಿ.ರಾಜೇಗೌಡ, ಶಿವಸೇನೆಯಿಂದ ಮಹೇಶ್ ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಜಾನ್ ಅಬ್ರಾಹಂ ನಾಮಪತ್ರ ಸಲ್ಲಿಸಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಬಿ.ನಿಂಗಯ್ಯ, ಪಕ್ಷೇತರ ಅಭ್ಯರ್ಥಿಯಾಗಿ ವೆಂಕಟೇಶ್ ಸೇರಿ 3 ನಾಮಪತ್ರಗಳು ಸಲ್ಲಿಕೆಯಾದವು.