ದೇವೇಗೌಡರ ಹೇಳಿಕೆ: ಸ್ಪಷ್ಟೀಕರಣ
ಮೈಸೂರು, ಮೇ 8: ‘ಮೈಸೂರಿನ ಕೃಷ್ಣರಾಜ ಕ್ಷೇತ್ರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿಲ್ಲ’ ಎಂಬ ಶೀರ್ಷಿಕೆಯ ವರದಿಯಲ್ಲಿ ತಪ್ಪಾಗಿ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಸಾ. ರಾ. ಮಹೇಶ್ ಎಂದು ಉಲ್ಲೇಖವಾಗಿದೆ. ಕೃಷ್ಣರಾಜ ಕ್ಷೇತ್ರದ ಬದಲಿಗೆ ಕೆ. ಆರ್. ನಗರ ಎಂದೂ ತಪ್ಪಾಗಿ ಉಲ್ಲೇಖವಾಗಿದೆ. ಕಣ್ತಪ್ಪಿನಿಂದ ಆದ ಈ ಪ್ರಮಾದಕ್ಕೆ ವಾರ್ತಾಭಾರತಿ ವೆಬ್ಸೈಟ್ ವಿಷಾದಿಸುತ್ತದೆ. ಕೃಷ್ಣ ರಾಜ ಕ್ಷೇತ್ರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ದೇವೆಗೌಡರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೃಷ್ಣರಾಜ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಕೆ.ವಿ. ಮಲ್ಲೇಶ್ ಅಭ್ಯರ್ಥಿಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಕೆ. ಆರ್. ನಗರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಾ.ರಾ. ಮಹೇಶ್ ಅವರು ಭಾರೀ ಬಹುಮತದೊಂದಿಗೆ ಗೆಲ್ಲಲಿದ್ದಾರೆ ಎಂದು ಪಕ್ಷದ ವರಿಷ್ಠರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Next Story