ಚಿಕ್ಕಮಗಳೂರು: ದತ್ತಪೀಠಕ್ಕೆ ಮಿನಿಬಸ್ ಒದಗಿಸಲು ಸಚಿವರಿಗೆ ಮನವಿ
ಚಿಕ್ಕಮಗಳೂರು,ಜು.01: ಚಿಕ್ಕಮಗಳೂರಿನಿಂದ ದತ್ತಪೀಠಕ್ಕೆ ಹೋಗಲು ಅನುಕೂಲವಾಗುವಂತೆ ಕೆ.ಎಸ್.ಆರ್.ಟಿ.ಸಿ ಮಿನಿ ಬಸ್ಸನ್ನು ಬಿಡುವಂತೆ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ರವರಿಗೆ ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆಯ ಕೆ.ಎಸ್.ಗುರುವೇಶ್ ಮನವಿ ನೀಡಿದರು.
ನಂತರ ಮಾತನಾಡಿದ ಅವರು, ದತ್ತ ಪೀಠಕ್ಕೆ ನಗರದಿಂದ ತೆರಳಲು ಕೇವಲ ಒಂದು ಖಾಸಗಿ ಬಸ್ ಇದೆ. ಅದು ಸಹ ಸರಿಯಾದ ಸಮಯಕ್ಕೆ ಓಡಾಡುತ್ತಿಲ್ಲ ಇದರಿಂದ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಉಪಾಧ್ಯಾರಿಗೆ, ಕೂಲಿ ಕಾರ್ಮಿಕರಿಗೆ ಬಹಳ ತೊಂದರೆಯಾಗುತ್ತಿದೆ. ತಕ್ಷಣವೇ ಮಿನಿ ಬಸ್ಸನ್ನು ನೀಡಿ ಅನುಕೂಲ ಮಾಡಿ ಕೋಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನೀಲಕಂಠೇಶ್, ಮುನಿರಾಜು, ವೀಣಾ, ಗೀತಾ, ಪವಿತ್ರ, ಮಂಜುನಾಥ್, ರಾಮೇಗೌಡ ಇದ್ದರು.
Next Story