ಕುಮಾರಸ್ವಾಮಿಗೆ ‘ಉತ್ತಮ ನಟ’ ಪ್ರಶಸ್ತಿ ನೀಡಬೇಕು: ಬಿಜೆಪಿ ಲೇವಡಿ
ಬೆಂಗಳೂರು, ಜು. 15: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಓರ್ವ ನಟರಾಗಿದ್ದು, ತಮ್ಮ ಅಮೋಘ ನಟನೆಯಿಂದ ಕರ್ನಾಟಕ ರಾಜ್ಯದ ಜನತೆಯನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಬಿಜೆಪಿ ತನ್ನ ಟ್ವಿಟ್ವರ್ ಖಾತೆಯಲ್ಲಿ ಲೇವಡಿ ಮಾಡಿದೆ.
ಸಿಎಂ ಕುಮಾರಸ್ವಾಮಿ ನಿನ್ನೆ ಪಕ್ಷದ ವೇದಿಕೆಯಲ್ಲಿ ‘ನಾನು ಎಲ್ಲ ನೋವುಗಳನ್ನು ನುಂಗಿಕೊಂಡು ವಿಷಕಂಠನಾಗಿದ್ದೇನೆ’ ಎಂದು ಕಣ್ಣೀರಿಟ್ಟಿದ್ದರು. ನಮ್ಮ ದೇಶವು ಅದ್ಭುತ ಕಲಾವಿದರನ್ನು ಹೊಂದಿದೆ. ಕಲಾವಿದರು ನಟನಾ ಚಾತುರ್ಯದಿಂದಲೆ ಪ್ರೇಕ್ಷಕರನ್ನು ಮೂಕವಿಸ್ಮಿತರಾಗುವ ರೀತಿ ನಟಿಸಿ ಅವರ ಮನಸ್ಸನ್ನು ಗೆದ್ದಿದ್ದಾರೆ.ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ನಟನಾ ಕೌಶಲ್ಯದಿಂದ ಜನರು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸಿಎಂ ಅವರ ಈ ಅದ್ಭುತ ನಟನೆಗೆ ‘ಉತ್ತಮ ನಟ’ ಪ್ರಶಸ್ತಿ ನೀಡಬೇಕು ಎಂದು ಬಿಜೆಪಿ ಟ್ವಿಟ್ನಲ್ಲಿ ಟೀಕಿಸಿದೆ.
Next Story