ಚಿಕ್ಕಮಗಳೂರು: ಕೀಟನಾಶಕ ಕುಡಿದು ರೈತ ಆತ್ಮಹತ್ಯೆ
ಚಿಕ್ಕಮಗಳೂರು, ಜು.15: ಸಾಲಬಾಧೆಯಿಂದಾಗಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಹುಲಿಹಳ್ಳಿ ಗ್ರಾಮದಲ್ಲಿ ರವಿವಾರ ನಡೆದಿದೆ.
ಕಡೂರು ತಾಲೂಕು ಅಜ್ಜಂಪುರದ ಹುಲಿಹಳ್ಳಿಯ ಪ್ರಕಾಶ್(38) ಮೃತಪಟ್ಟ ರೈತ ಎಂದು ತಿಳಿದು ಬಂದಿದ್ದು, ಪ್ರಕಾಶ್ ರವಿವಾರ ಬೆಳಗ್ಗೆ ತಮ್ಮ ಮನೆಯಲ್ಲಿ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕಾಶ್ ಡಿಸಿಸಿ ಬ್ಯಾಂಕಿನಲ್ಲಿ 5 ಲಕ್ಷ ರೂ. ಹಾಗೂ ಸಾಕಷ್ಟು ಕೈ ಸಾಲ ಮಾಡಿ ದಾಳಿಂಬೆ ಕೃಷಿ ಮಾಡಿದ್ದರೆಂದು ತಿಳಿದು ಬಂದಿದ್ದು, ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಅವರು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story