ಮೈಸೂರು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಮೈಸೂರು,ಜು.21: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿಯೋರ್ವ ತನ್ನ ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಜನತಾನಗರ 7ನೇ ಕ್ರಾಸ್ ನಲ್ಲಿ ನಡೆದಿದೆ.
ಮೃತನನ್ನು ಮಹೇಂದ್ರ(35)ಎಂದು ಗುರುತಿಸಲಾಗಿದ್ದು, ಈತ ಅರವಿಂದ ನಗರದ ಕೆ.ಎಸ್.ಆರ್.ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಕಳೆದ ಎರಡು ಮೂರು ವಾರಗಳಿಂದ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿಯೇ ಎಲ್ಲರೊಂದಿಗೂ ಸಂತೋಷದಿಂದಿದ್ದ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ದೂರವಾಣಿ ಕರೆಯನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂದು ಮನೆಗೆ ಬಂದು ನೋಡಿದಾಗ ಮನೆಯವರಿಗೆ ಈತ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ಈತ ರಾಮಕೃಷ್ಣನಗರ ಪಾಲಿಕೆ ಸದಸ್ಯ ಶಂಕರ್ ಅವರ ಸೋದರಳಿಯ ಎಂದು ಹೇಳಲಾಗಿದ್ದು, ವಿವಾಹವಾಗಿ ಎರಡು ವರ್ಷವಾಗಿತ್ತು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story