ತಮಿಳುನಾಡಿಗೆ ಎರಡು ದಿನಗಳ ಕಾಲ ಬಸ್ ಸಂಚಾರ ಬಂದ್
ಕರುಣಾನಿಧಿ ನಿಧನ ಹಿನ್ನೆಲೆ
ಬೆಂಗಳೂರು, ಆ.7: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತಮಿಳುನಾಡಿಗೆ ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರವನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ಸಂಜೆಯಿಂದಲೇ ಬಸ್ಗಳ ಸಂಚಾರಕ್ಕೆ ತಡೆ ನೀಡಲಾಗಿದ್ದು, ಪ್ರತಿನಿತ್ಯ ತಮಿಳುನಾಡು ರಾಜಧಾನಿ ಚೈನ್ನೈಗೆ 87 ಬಸ್ಸುಗಳು ಸೇರಿದಂತೆ ನೂರಾರು ಬಸ್ಸುಗಳು ಸಂಚಾರ ಮಾಡುತ್ತಿವೆ. ಇವೆಲ್ಲ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.
Next Story