ಶಿರಾಡಿ ಘಾಟಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ಪ್ರಯಾಣಿಕರು
ಘಾಟಿಯಲ್ಲಿ ಸಿಲುಕಿದ ಮುನ್ನೂರಕ್ಕೂ ಹೆಚ್ಚು ಬಸ್ಸು, ಲಾರಿ, ಕಾರುಗಳು
ಮಂಗಳೂರು, ಆ. 14: ಶಿರಾಡಿ ಘಾಟಿಯ ಮಾರನಹಳ್ಳಿ ಸಮೀಪದ ದೊಡ್ಡತೊಪ್ಪೆಯಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದು, ಮರಗಳು ಬಿದ್ದ ಪರಿಣಾಮ ಸುಮಾರು ಮುನ್ನೂರಕ್ಕೂ ಹೆಚ್ಚು ವಾಹನಗಳು ಶಿರಾಡಿ ಘಾಟಿಯಲ್ಲಿ ಸಿಲುಕಿಕೊಂಡು, ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ
ಸೋಮವಾರ ರಾತ್ರಿಯಿಂದ ಬೆಂಗಳೂರಿಗೆ ಹೋಗುವ ನೂರಕ್ಕೂ ಹೆಚ್ಚು ಬಸ್ಸುಗಳು, ಲಾರಿಗಳು, ಖಾಸಗಿ ವಾಹನಗಳು ಶಿರಾಡಿ ಘಾಟಿಯಲ್ಲಿ ಬಾಕಿಯಾಗಿದ್ದು, ತೆರವು ಕಾರ್ಯಾಚರಣೆ ನಡೆಯುತಿದೆ.
ಶಿರಾಡಿ ಘಾಟಿಯ ಗುಂಡ್ಯ ಗಡಿ ದೇವಳದ ಸಮೀಪದಿಂದ ಮೇಲ್ಗಡೆಗೆ ಸುಮಾರು ಮೂರು ಕಡೆಗಳಲ್ಲಿ ಗುಡ್ಡ ಕುಸಿತ, ಮರಗಳು ಬಿದ್ದ ಪರಿಣಾಮ ವಾಹನಗಳು ಘಾಟಿಯಲ್ಲೇ ಉಳಿಯುವಂತಾಗಿದೆ.
ಈ ಗುಡ್ಡ ಕುಸಿತದ ಮಣ್ಣನ್ನು ಮತ್ತು ಮರಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ರಾತ್ರೆಯಿಂದ ದಾರಿ ಮದ್ಯೆ ಸಿಲುಕಿಕೊಂಡಿರುವ ವಾಹನಗಳ ಪ್ರಯಾಣಿಕರಿಗೆ ನೆಟ್ ವರ್ಕ್ ಕೂಡಾ ಸಿಗದ ಸ್ಥಳವಾದ ಕಾರಣ ಪರದಾಟದಲ್ಲಿದ್ದು, ಸುಮಾರು 5-6 ಕಿಮೀ ನಡೆದುಕೊಂಡು ಗುಂಡ್ಯ ಹಾಗು ನೆಲ್ಯಾಡಿಗೆ ಹೋಗುತಿದ್ದಾರೆ.
ಈ ನೂರಾರು ಪ್ರಯಾಣಿಕರಿಗೆ ತುರ್ತು ಸ್ಪಂದನೆಗಾಗಿ ಜಿಲ್ಲಾಡಳಿತ ಮತ್ತು ಇಲಾಖೆಗಳು, ಸಾರ್ವಜನಿಕರೂ ಧಾವಿಸಬೇಕಾಗಿದೆ.