ಮಂಡ್ಯ: ಗುಂಪು ಘರ್ಷಣೆ; ಇಬ್ಬರಿಗೆ ಗಾಯ
ಮಂಡ್ಯ, ಆ.17: ಹಳೇ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪಿನ ನಡುವೆ ನಡೆದ ಮಾತಿನ ಚಕಮಕಿ ಘರ್ಷಣೆಗೆ ತಿರುಗಿ ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ತಡರಾತ್ರಿ ಮದ್ದೂರಿನ ಶಿವಪುರದಲ್ಲಿ ಜರುಗಿದೆ.
ಸೋದರ ಸಂಬಂಧಿಗಳಾದ ಶಿವಪುರದ ರಘು ಮತ್ತು ರವಿಕುಮಾರ್ ಘರ್ಷಣೆ ವೇಳೆ ಗಾಯಗೊಂಡು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಸ್ಕೂಟರ್ ಗೆ ಢಿಕ್ಕಿಯೊಡೆದರೆಂಬ ವಿಚಾರಕ್ಕೆ ತಗಾದೆ ತೆಗೆದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು ಎನ್ನಲಾಗಿದೆ.
ಈ ಸಂಬಂಧ ಗಾಯಾಳುಗಳಿಬ್ಬರು ಪ್ರತ್ಯೇಕವಾಗಿ ನೀಡಿದ ದೂರಿನ ಮೇರೆಗೆ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story