ಗುಂಡ್ಲುಪೇಟೆ: ಮನೆ ಗೋಡೆ ಕುಸಿದು ಯುವಕ ಮೃತ್ಯು
ಗುಂಡ್ಲುಪೇಟೆ,ಆ.18: ಮೂತ್ರವಿಸರ್ಜನೆಗೆ ಹೋಗಿದ್ದ ಯುವಕನ ಮೇಲೆ ಗುಡಿಸಲಿನ ಗೋಡೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ತೆರಕಣಾಂಬಿಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಇಬಾದ್(32) ಎಂಬಾತ ಮಧ್ಯಾಹ್ನ ಮೂತ್ರ ವಿಸರ್ಜನೆಗೆಂದು ಮಲ್ಲಪ್ಪ ಎಂಬವರ ಹಳೆಯ ಗುಡಿಸಿಲಿನ ಬಳಿ ಹೋಗಿದ್ದಾಗ ಈತನ ಮೇಲೆ ಗೋಡೆ ಕುಸಿದುಬಿದ್ದಿದೆ. ಬಹಳ ಹೊತ್ತಿನವರೆಗೂ ಇಬಾದ್ ಗ್ಯಾರೇಜ್ ಗೆ ಹಿಂದಿರುಗದಿದ್ದಾಗ ಅಕ್ಕಪಕ್ಕದವರು ಹುಡುಕಾಟ ನಡೆಸಿದ್ದು, ಈ ವೇಳೆ ಇಬಾದ್ ಕುಸಿದು ಬಿದ್ದ ಗೋಡೆಯಡಿ ಸಿಲುಕಿ ಮೃತಪಟ್ಟಿರುವುದು ತಿಳಿದುಬಂದಿದೆ.
ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
Next Story