ಜೋಡುಪಾಲ: ಮಣ್ಣಿನಡಿ ಸಿಲುಕಿದ್ದ ಮಹಿಳೆಯ ಮೃತದೇಹ ಪತ್ತೆ
ಮಡಿಕೇರಿ, ಆ. 24: ಭಾರೀ ಮಳೆ ಹಾಗು ಗುಡ್ಡ ಜರಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಮಹಿಳೆಯೋರ್ವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ.
ಮೃತರನ್ನು ಜೋಡುಪಾಳ ನಿವಾಸಿ ಬಸಪ್ಪ ಎಂಬವರ ಪತ್ನಿ ಗೌರಮ್ಮ ಯಾನೆ ಸೀತಕ್ಕ (30) ಎಂದು ಗುರುತಿಸಲಾಗಿದೆ.
ಜೋಡುಪಾಲ- ಅಬ್ಬಿಕೊಳ್ಳಿ ಸೇತುವೆಯ ಸಮೀಪ ಗೌರಮ್ಮರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬಸಪ್ಪ ಅವರ ಮೃತದೇಹವನ್ನು ಇತ್ತೀಚೆಗೆ ಮಣ್ಣಿನಡಿಯಿಂದ ಹೊರ ತೆಗೆಯಲಾಗಿತ್ತು.
Next Story