ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುವೆ : ಸಿಎಂ ಕುಮಾರಸ್ವಾಮಿ
ಬೆಂಗಳೂರು, ಆ. 25: ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುವೆ ಎಂದು ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ ಮುಖ್ಯ ಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುವುದಿಲ್ಲ. ನಾನು ಪ್ರಮಾಣ ವಚನ ಸ್ವೀಕರಿಸುವಾಗಲೇ ಇಷ್ಟು ದಿನ ಮುಖ್ಯ ಮಂತ್ರಿಯಾಗಿರಬೇಕೆಂದು ದೇವರು ಹಣೆಯಲ್ಲಿ ಬರೆದಿದ್ದಾನೆ. ಅಷ್ಟು ದಿನ ಚೆನ್ನಾಗಿ ಇರುತ್ತೇನೆ. ಸರಕಾರ ಎಷ್ಟು ದಿನ ಇರುತ್ತೆ ಎಂಬ ಚಿಂತೆ ನಿಮಗೆ ಬೇಡ ಎಂದರು.
ಮಹತ್ವದ ಜವಾಬ್ದಾರಿಗಳು ನನ್ನ ಮೇಲಿದೆ. ನಮ್ಮದು ಸಮ್ಮಿಶ್ರ ಸರಕಾರ. ಎಲ್ಲದಕ್ಕೂ ಇತಿಮಿತಿ ಇದೆ. ಎಲ್ಲ ವಿಚಾರಗಳಿಗೂ ಒಬ್ಬನೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ . ನಾನು ಯಾವ ಕೆಲಸ ಮಾಡಬೇಕೊ ಅದನ್ನು ಮಾಡುತ್ತೇನೆ ಎಂದು ಹೇಳಿದರು.
Next Story