ಸುಂಟಿಕೊಪ್ಪ: ಪುರ್ನವಸತಿ ಕೇಂದ್ರದಲಿರುವ ಸಂತ್ರಸ್ತರಿಗೆ ಚಾಪೆ, ಪಾತ್ರೆ ವಿತರಣೆ
ಸುಂಟಿಕೊಪ್ಪ,ಆ.27: ಅತಿವೃಷ್ಠಿಯಿಂದ ಪುರ್ನವಸತಿ ಕೇಂದ್ರದಲಿರುವ ಸಂತ್ರಸ್ತರಿಗೆ ಗದಗ ಜಿಲ್ಲೆಯ ಗಜೇಂದ್ರಗಡ ನಿವಾಸಿಗಳಿಂದ ಆಶೋಕ್ ಕುಮಾರ್ ಭಾಗ್ಮಾರ್ ತಂಡದವರು ಚಾಪೆ ಪಾತ್ರೆಗಳನ್ನು ವಿತರಿಸಿದರು.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ ಹಾಗೂಸರಕಾರಿ ಪ್ರೌಢಶಾಲೆ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪುರ್ನವಸತಿ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಮಡಿಕೇರಿ ನ್ಯಾಯಾಧೀಶರಾದ ನೂರುನ್ನೀಸಾ ಹಾಗೂ ಆಶೋಕ್ ಕುಮಾರ್ ಭಾಗ್ಮಾರ್ ಚಾಪೆ, ಬಕೆಟ್ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭ ಎ.ಡಿ.ಕುಲಕೆರ್,ಪಿರೋಝ್ ಮೋಮಿನ್ ಮೋಹನ್ ಕಣಿಕೇರೆ ಇವರುಗಳು ಉಪಸ್ಥಿತರಿದ್ದರು.
Next Story