ಹನೂರು: ಭಾರತ್ ಬಂದ್ ಬೆಂಬಲಿಸಲು ಶಾಸಕ ನರೇಂದ್ರರಾಜುಗೌಡ ಮನವಿ
ಹನೂರು,ಸೆ.9: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ಗೆ ಹನೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಂಘಟನೆ ಮತ್ತು ಸಾರ್ವಜನಿಕರು ಪಕ್ಷಾತೀತ, ಜಾತ್ಯತೀತವಾಗಿ ಭಾಗವಹಿಸಿ ಬೆಂಬಲ ನೀಡಿ ಯಶಸ್ವಿಗೊಳಿಸಬೇಕಾಗಿ ಶಾಸಕ ಆರ್.ನರೇಂದ್ರರಾಜುಗೌಡ ಮನವಿ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಭಾರತ್ ಬಂದ್ ಪೂರ್ವಸಭೆ ಕುರಿತು ಮಾತನಾಡಿದ ಅವರು, ದೇಶದಲ್ಲಿ ನರೇಂದ್ರಮೋದಿ ಸರ್ಕಾರ ಆಡಳಿತಕ್ಕೆ ಬಂದು 5 ವರ್ಷಗಳಾಗುತ್ತಿದ್ದು, ಜನಪರ ಕಾರ್ಯಗಳನ್ನು ಮಾಡದೇ ಸುಳ್ಳುಗಳ ಮೂಲಕವೇ ದೇಶದ ಜನರನ್ನು ದಿಕ್ಕುತಪ್ಪಿಸಿ ಹಗಲುದರೋಡೆ ಮಾಡುತ್ತಿದೆ. ಇದರಿಂದ ಬೇಸತ್ತು ರಾಹುಲ್ ಗಾಂಧಿ ಬಂದ್ಗೆ ಕರೆ ಕೂಟ್ಟಿದ್ದು, ಅದರಂತೆ ಹನೂರು ತಾಲೂಕಿನ್ಯಾದಂತ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ, ಮುಗ್ಗಂಟುಗಳನ್ನು ಮುಚ್ಚಿ ನಾಳೆ ಬೆಳ್ಳಗ್ಗೆಯಿಂದ ಸಂಜೆಯವರೆಗೆ ಬೆಂಬಲ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭ ಸಂಸದ ಆರ್.ದ್ರುವನಾರಯಣ್, ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯ ಬಸವರಾಜು, ತಾಲೂಕು ಪಂ. ಅಧ್ಯಕ್ಷ ರಾಜು, ಸದಸ್ಯರುಗಳಾದ ರಾಜೇಂದ್ರ, ಪಾರ್ವತಿಬಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ಮುಖಂಡರಾದ ವೆಂಕಟರಮಣ ನಾಯ್ಡು, ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಗುಪ್ತ, ಚಿಕ್ಕತಮ್ಮಯ್ಯಗೌಡ ಮಹೇಶ್, ಶಿವಶಂಕರ್ ಇನ್ನಿತರರು ಹಾಜರಿದ್ದರು.