ಬಾಗೇಪಲ್ಲಿ: ರಸ್ತೆ ಅಪಘಾತಕ್ಕೆ ವೃದ್ಧೆ ಬಲಿ
ಬಾಗೇಪಲ್ಲಿ,ಸೆ.14: ಸರಕು ಸಾಗಾಣಿಕಾ ವಾಹನದ ಚಕ್ರದ ಅಡಿಗೆ ಸಿಲುಕಿ ವೃದ್ದೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಜೂಲ್ಯಪಾಳ್ಯ ಗ್ರಾಮದ ನಿವಾಸಿ ವೆಂಕಟಮ್ಮ (90) ಮೃತಪಟ್ಟ ವೃದ್ಧೆ.
ಅವರು ಶುಕ್ರವಾರ ಮಧ್ಯಾಹ್ನ ತಮ್ಮ ಮನೆಯಿಂದ ಗ್ರಾಮದ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಬಂದ ಬೊಲೇರೊ ವಾಹನ ಅತಿವೇಗವಾಗಿ ಬಂದು ವೃದ್ದೆಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಚಕ್ರದ ಅಡಿಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆಯ ಪಿಎಸ್ಐ ಎಸ್.ಕೆ. ಮುದ್ದಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ, ವಾಹನವನ್ನು ವಶಕ್ಕೆ ಪಡೆದು, ಪ್ರಕರಣವನ್ನು ದಾಖಲಿಸಿದ್ದಾರೆ.
Next Story