ಗುಂಡ್ಲುಪೇಟೆಯಲ್ಲಿ ಲಾರಿ ಅಪಘಾತ: ಚಾಲಕನಿಗೆ ಗಾಯ
ಗುಂಡ್ಲುಪೇಟೆ,ಸೆ.25: ತಾಲೂಕಿನ ಬೇಗೂರು ಸಮೀಪ ಮೈಸೂರಿನಿಂದ ಕೇರಳಕ್ಕೆ ಸಾಗುತ್ತಿದ್ದ ದಾಳಿಂಬೆ ಹಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಘಟನೆ ನಡೆದಿದೆ.
ಬೆಳಗ್ಗಿನ ಜಾವ ಈ ಘಟನೆ ಸಂಭವಿಸಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story