ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಚುನಾವಣಾ ಕಾರ್ಯಾಗಾರ
ಚಿಕ್ಕಮಗಳೂರು, ಸೆ.26: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನ 2018ನೇ ಸಾಲಿನ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಘಟಕಗಳ ಅಧಿಕಾರಿಗಳು, ಮತ್ತು ನಾಯಕರಿಗೆ ಚುನಾವಣಾ ಕಾರ್ಯಾಗಾರವನ್ನು ಬಾಳೆಹೊನ್ನೂರಿನಲ್ಲಿರುವ ಅಲ್ ಮಂಝಿಲ್ ಅಕಾಡಮಿಯಲ್ಲಿ ಜಿಲ್ಲಾಧ್ಯಕ್ಷ ಸೈಯದ್ ಹಾಮೀಂ ಶಿಹಾಬ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಮೀದ್ ಉಸ್ತಾದ್ ನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಚುನಾವಣಾ ಮಂಡಳಿಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ಕಾರ್ಯಾಗಾರ ನಿರ್ವಹಿಸಿದರು. ರಾಜ್ಯ ತಾಂತ್ರಿಕ ಅಧಿಕಾರಿ ರವೂಫ್ ಉಡುಪಿ ತಾಂತ್ರಿಕ ಮಾಹಿತಿ ನೀಡಿದರು. ಹುಸೈನ್ ಸಅದಿ ಹೊಸ್ಮಾರ್ ಯುನಿಟ್ ಕಾನ್ಫರೆನ್ಸ್ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ನಾಯಕರಾದ ಉಸ್ಮಾನ್ ಉಪ್ಪಳ್ಳಿ, ಇಬ್ರಾಹೀಂ ಮೂಡಿಗೆರೆ, ಜಿಲ್ಲಾ ನಾಯಕರಾದ ಮುನೀರ್ ಚಿಕ್ಕಮಗಳೂರು, ಆಬಿದ್ ಸಖಾಫಿ ಮಾಗುಂಡಿ, ಸುಲೈಮಾನ್ ಶೆಟ್ಟಿ ಕೊಪ್ಪ, ಅಝೀಝ್ ಮಾಗುಂಡಿ, ಸೈದಲವಿ ಚಿಕ್ಕಮಗಳೂರು, ನಸೀರ್ ಅಹ್ಮದ್ ಉಪ್ಪಳ್ಳಿ, ಅಬ್ದುಲ್ ರಹಿಮಾನ್ ಕೊಪ್ಪ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ಝುಹ್ರಿ ಕಲ್ದೊಡ್ಡಿ ಸ್ವಾಗತಿಸಿದರು. ಸಫ್ವಾನ್ ಸಖಾಫಿ ವಂದಿಸಿದರು.