ಎಸ್ಸಿ, ಎಸ್ಟಿ ನೌಕರರ ಭಡ್ತಿ ಮೀಸಲು ಜಾರಿಗೆ ಒತ್ತಾಯ
ಬೆಂಗಳೂರು, ಸೆ.27: ಸರಕಾರಿ ಎಸ್ಸಿ, ಎಸ್ಟಿ ನೌಕರರ ಭಡ್ತಿ ಮೀಸಲು ಜಾರಿಗೆ ತರಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಒಕ್ಕೂಟ ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಗೌರವ ಸಲಹೆಗಾರ ಎಚ್.ಕೆ. ಗೋವಿಂದಪ್ಪ, ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯ ಸರಕಾರ ಜಾರಿಗೊಳಿಸಬೇಕು. ಹಿಂಭಡ್ತಿ ಹೊಂದಿದ್ದ ನೌಕರರನ್ನು ಅದೇ ಸ್ಥಾನಕ್ಕೆ ನೇಮಕ ಮಾಡಬೇಕು ಆಗ್ರಹಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ದಾಸ್ಪ್ರಕಾಶ್, ಉಪಾಧ್ಯಕ್ಷ ಮುನಿರಾಜು, ಕೋಶಾಧ್ಯಕ್ಷ ಕೆಂಪರಾಜು ಉಪಸಿ್ಥತರಿದ್ದರು
Next Story