ಹನೂರು: ಬಸ್ ನಿಲ್ದಾಣ ದುರಸ್ತಿಗೆ ಒತ್ತಾಯಿಸಿ ಧರಣಿ
ಹನೂರು,ಸೆ.27: ಪಟ್ಟಣದ ಕೆಸ್ಆರ್ಟಿಸಿ ಬಸ್ ನಿಲ್ದಾಣ ಸರಿಪಡಿಸಲು ಒತ್ತಾಯಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರರು ಗಿಡನೆಟ್ಟು ಧರಣಿ ನಡೆಸಿದರು.
ಹನೂರು ಘಟಕದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಹನೂರು ಕರ್ನಾಟಕ ರಸ್ತೆ ಸಾರಿಗೆ ಬಸ್ ನಿಲ್ದಾಣದ ಮುಂದೆ ಸಾಂಕೇತಿಕವಾಗಿ ಗಿಡನೆಡುವ ಮುಖಾಂತರ ಪ್ರತಿಭಟನೆಯನ್ನು ನಡೆಯಿತು. ಈ ವೇಳೆ ಮಾತನಾಡಿದ ಅಧ್ಯಕ್ಷ ವಿನೋದ್ ಹನೂರು ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರೆತೆಯಿದ್ದು, ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತದೆ ಎಂದರು.
ಈ ಸಂದರ್ಭ ಕಾರ್ಯದರ್ಶಿ ಮೂರ್ತಿ ,ಗಿರೀಶ್ ನಾಗೇಂದ್ರ, ಬಸವರಾಜು, ಕಾರ್ತಿಕ್, ಶೀನಾ, ಶಾಮ್ವಿಲ್, ಇಮ್ರಾನ್, ಶಿವು ಹರೀಶ್ ಇನ್ನಿತರರು ಹಾಜರಿದ್ದರು.
Next Story