ಬೆಂಕಿ ಆಕಸ್ಮಿಕ: 14 ಜಾನುವಾರುಗಳು ಸಜೀವ ದಹನ
ಧಾರವಾಡ, ಅ.6: ದನದ ಕೊಟ್ಟಿಗೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ 14 ಜಾನುವಾರುಗಳು ಸಜೀವ ದಹನವಾದ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಎಂಬ ಗ್ರಾಮದಲ್ಲಿ ನಡೆದಿದೆ.
ಗಳಗಿ ಹುಲಕೊಪ್ಪಗ್ರಾಮದ ಅಡಿವೆಯ್ಯ ಹಿರೇಮಠ ಎಂಬವರಿಗೆ ಸೇರಿದ ಜಾನುವಾರುಗಳು ಇದಾಗಿದೆ. ರಾತ್ರಿ ಸಂಭವಿಸಿದ ಈ ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ. ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಕೊಟ್ಟಿಗೆ ಸಂಪೂರ್ಣ ಉರಿದು ಭಸ್ಮವಾಗಿದೆ. ಇದರೊಂದಿಗೆ ಕೊಟ್ಟಿಗೆಯಲ್ಲಿದ್ದ 14 ಜಾನುವಾರುಗಳು ಸಜೀವ ದಹನವಾಗಿದೆ.
ಸ್ಥಳಕ್ಕೆ ಕಲಘಟಗಿ ಪೋಲಿಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story