ಬಾಗೇಪಲ್ಲಿ: ಹಾವು ಕಡಿದು ಬಾಲಕಿ ಮೃತ್ಯು
ಬಾಗೇಪಲ್ಲಿ,ಅ.9: ಹಾವು ಕಡಿದು ಒಂದನೇ ತರಗತಿ ವಿದ್ಯಾರ್ಥಿನಿ ಭಾರತಿ(6) ಎಂಬ ಬಾಲಕಿ ಮೃತಪಟ್ಟ ಘಟನೆ ತಾಲೂಕಿನ ಪುಟ್ಟಪರ್ತಿ ಗ್ರಾಮದ ಹೊಲದಲ್ಲಿ ನಡೆದಿದೆ.
ತಂದೆ-ತಾಯಿ ಜೊತೆಯಲ್ಲಿ ತಮ್ಮ ಹೊಲಕ್ಕೆ ಹೋದ ಬಾಲಕಿ ನಂತರ ಮನೆಗೆ ವಾಪಸ್ ಬಂದು ಮಲಗಿದ್ದಳು. ಈ ವೇಳೆ ಬಾಲಕಿಯ ಬಾಯಲ್ಲಿ ನೊರೆ ಬರುತ್ತಿದ್ದನ್ನು ಕಂಡ ಪೋಷಕರು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲು ಮಾಡಲು ತೆರಳುತ್ತಿದ್ದಾಗ ಮಾರ್ಗಮದ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.
Next Story