ಎನ್ಡಿಎ ಶಕ್ತಿ ಶಿಥಿಲವಾಗಲಿದೆ: ವೀರಪ್ಪ ಮೊಯ್ಲಿ ಭವಿಷ್ಯ
ಮಡಿಕೇರಿ, ಅ.9: ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಬಲಯುತವಾಗಿದ್ದು, ಚುನಾವಣೆ ಸಂದರ್ಭ ಎನ್ಡಿಎಯ ಶಕ್ತಿ ಮತ್ತಷ್ಟು ಶಿಥಿಲವಾಗಲಿದೆಯೆಂದು ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತೃತೀಯ ರಂಗಗಳು ನಿರ್ಣಾಯಕ ಧೋರಣೆ ತಾಳಿಲ್ಲ ಎಂದರು. ಮುಂಬರುವ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ನಡೆಯಲಿದೆ. ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಸೀಟು ಹಂಚಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಧಾನಮಂತ್ರಿ ಮೋದಿಯವರು ಕರ್ನಾಟಕದಿಂದ ಸ್ಪರ್ಧಿಸುವ ಕುರಿತು ಬಂದಿರುವ ಮಾಹಿತಿಗೆ ಪ್ರತಿಕ್ರಿಯೆ ನೀಡಿದ ಅವರು, ಬನಾರಸ್ನಿಂದ ಮೋದಿಯವರಿಗೆ ಪಲಾಯನ ಮಾಡುವ ಸ್ಥಿತಿ ಬಂದೊದಗಿದೆಯೇ ಎಂದು ಪ್ರಶ್ನಿಸಿದರು.
Next Story