ಮೃತ ಯೋಧರ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ನೀಡಿದ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ
ಮೈಸೂರು,ಅ.15: ದೇಶಕ್ಕಾಗಿ ಸೇವೆ ಸಲ್ಲಿಸಿದ್ದ 2014 ರಿಂದೀಚೆಗೆ ಮೃತರಾದ ಯೋಧರ ಕುಟುಂಬಸ್ಥರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಹತ್ತು ಲಕ್ಷ ರೂಪಾಯಿ ಚೆಕ್ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಡಾ. ಸುಧಾ ಮೂರ್ತಿ ಅವರು ಹೆಚ್.ಡಿ ಕೋಟೆ ಮೃತ ಯೋಧ ಮಹೇಶ್, ಹಾಸನದ ಜಿ.ಟಿ.ನಾಗೆಶ್, ಯೋಗಾನಂದ್ ಸಿ., ಸಂದೀಪ್ ಕುಮಾರ್, ಸಾಗರ್ ಸೇರಿದಂತೆ ಆರು ಕುಟುಂಬಗಳಿಗೆ ಸಹಾಯ ಮಾಡಿದರು.
ಕಾರ್ಗಿಲ್ ಯುದ್ಧದ ಬಳಿಕ ಮೃತಪಟ್ಟ ಹಾಗೂ ಅಂಗ ಊನರಾದವರಿಗೂ ಸಹಾಯ ಮಾಡಲು ಸುಧಾಮೂರ್ತಿ ನಿರ್ಧರಿಸಿದ್ದಾರೆ. ರಾಜ್ಯಾದ್ಯಂತ ಮೃತ ಹಾಗೂ ಅಂಗಾಂಗಗಳನ್ನು ಕಳೆದುಕೊಂಡ ಸೈನಿಕರ ಕುಟುಂಬಸ್ಥರಿಗೆ ನೆರವು ನೀಡುವುದಾಗಿ ಹೇಳಿದರು. ಸ್ವತಃ ತಾವೇ ಚೆಕ್ ನೀಡಿ ಮೃತ ಯೋಧರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Next Story