ಸುಂಟಿಕೊಪ್ಪ: ಹಾರಂಗಿಯಲ್ಲಿ ತೆಪ್ಪ ಮುಳುಗಿ ಯುವಕ ಮೃತ್ಯು
ಸುಂಟಿಕೊಪ್ಪ, ಅ.17: ಹಾರಂಗಿ ಹಿನ್ನೀರಿನಲ್ಲಿ ತೆಪ್ಪ ಚಲಾಯಿಸುತ್ತಿದ್ದ ವೇಳೆ ತೆಪ್ಪ ಮುಳುಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹೆರೂರು ಗ್ರಾಮದ ಎ.ಪಿ.ವಿಶ್ವನಾಥ ಎಂಬವರ ಮಗ ಎ.ವಿ.ಸುಜಿತ್ (26) ಮೃತ ಯುವಕ ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ ಕಾನ್ಬೈಲ್ಗೆ ಸುಜಿತ್ ಒಬ್ಬನೆ ಹಾರಂಗಿ ಹಿನ್ನೀರಿನಲ್ಲಿ ತೆಪ್ಪಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹಿನ್ನೀರಿನ ಮಧ್ಯಭಾಗಕ್ಕೆ ಆಗಮಿಸುತ್ತಿದ್ದಂತೆ ಆಯತಪ್ಪಿದ್ದು, ತೆಪ್ಪವು ಮಗುಚಿದ್ದರಿಂದ ಸುಜಿತ್ ಹಿನ್ನೀರಿನಲ್ಲಿ ಮುಳುಗಿದ್ದಾನೆ. ಆದರೆ, ತೆಪ್ಪ ಮಾತ್ರ ತೆಲುತ್ತಿರುವುದು ಗೋಚರಿಸಿದೆ. ವಿಷಯ ತಿಳಿದ ಗ್ರಾಮಸ್ಥರು ಸುಜಿತ್ನ ದೇಹಕ್ಕಾಗಿ ಪೊಲೀಸರು ಅಗ್ನಿಶಾಮಕ ದಳ ಗ್ರಾಮಸ್ಥರೊಂದಿಗೆ ಹುಡುಕಾಡಿದರೂ ಯಾವುದೇ ಕುರುಹು ದೊರೆಯದೆ. ಬಳಿಕ ಬುಧವಾರ ಬೆಳಗ್ಗೆ ದುರ್ಘಟನೆ ನಡೆದ ಅನತಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಾಗಿದೆ.
Next Story