ಗುಂಡ್ಲುಪೇಟೆ: ವಿದ್ಯುತ್ ಹರಿಸಿದ್ದ ತಂತಿ ಬೇಲಿ ತಗುಲಿ ಯುವಕ ಮೃತ್ಯು
ಗುಂಡ್ಲುಪೇಟೆ,ಅ.19: ಬೆಳೆ ರಕ್ಷಣಗೆ ಹಾಕಿದ್ದ, ವಿದ್ಯುತ್ ಹರಿಸಿದ್ದ ತಂತಿ ಬೇಲಿಗೆ ಸಿಲುಕಿ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ತಾಲೂಕಿನ ಕೆಲಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಮಯ್ಯ ಎಂಬವರು ಕಾಡುಹಂದಿಗಳಿಂದ ಬೆಳೆ ರಕ್ಷಣೆಗೆ ತಮ್ಮ ಜಮೀನಿನ ಸುತ್ತಲೂ ತಂತಿ ಬೇಲಿ ಹಾಕಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಬೆಟ್ಟೇಗೌಡನಹುಂಡಿ ಗ್ರಾಮದ ಮಹದೇವೇಗೌಡ(38) ಎಂಬವರಿಗೆ ತಂತಿಬೇಲಿ ತಗುಲಿದ್ದು, ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಈ ಬಗ್ಗೆ ತೆರಕಣಾಂಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story