ಚಾಮರಾಜನಗರ: ಹೆಂಡತಿಯೊಂದಿಗೆ ಮುನಿದು ಟವರ್ ಹತ್ತಿ ಕುಳಿತ ಭೂಪ
ಚಾಮರಾಜನಗರ,ನ.2: ಹೆಂಡತಿ ಜೊತೆ ಜಗಳ ಮಾಡಿ ಮುನಿಸಿಕೊಂಡ ಪತಿರಾಯ ಟವರ್ ಏರಿ, ರಾತ್ರಿಯಿಡೀ ಟವರ್ ನಲ್ಲಿಯೇ ಬಾಕಿಯಾದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ವೆಂಕಟಯ್ಯನ ಛತ್ರದ ಮಹೇಶ ಟವರ್ ಏರಿಕುಳಿತ ಪತಿರಾಯ. ಮಹೇಶ ನಿನ್ನೆ ರಾತ್ರಿ ತನ್ನ ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದಾನೆ. ನಂತರ ಕೋಪದಿಂದ ಟವರ್ ಏರಿದ್ದಾನೆ ಎನ್ನಲಾಗಿದೆ.
ಟವರ್ ಏರಿದ ನಂತರ ವೆಂಕಟಯ್ಯ ಭಯದಿಂದ ಕೂಗಾಡಿದ್ದಾನೆ. ಆದರೆ ರಾತ್ರಿಯಗಿದ್ದಾರಿಂದ ಯಾರಿಗೂ ತಿಳಿದಿಲ್ಲ. ಇಂದು ಬೆಳಿಗ್ಗೆ ರಾಮಸಮುದ್ರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ಸ್ಥಳಿಯರು, ಪೊಲೀಸರ ಸಹಾಯದೊಂದಿಗೆ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
Next Story