ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಗೆಲುವು ಖಚಿತ: ಚಲುವರಾಯಸ್ವಾಮಿ
ಮಂಡ್ಯ ಲೋಕಸಭೆ ಉಪಚುನಾವಣೆ
ನಾಗಮಂಗಲ, ನ.3: ಸ್ವಗ್ರಾಮ ಇಜ್ಜಲಘಟ್ಟದಲ್ಲಿ ಪತ್ನಿ ಧನಲಕ್ಷ್ಮಿಯೊಂದಿಗೆ ಆಗಮಿಸಿ ಮತ ಚಲಾಯಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಪಕ್ಷದ ಆದೇಶದಂತೆ ನಾವು ಮೈತ್ರಿ ಅಭ್ಯರ್ಥಿ ಜೆಡಿಎಸ್ ಶಿವರಾಮೇಗೌಡರನ್ನು ಬೆಂಬಲಿಸಿ ಮತಚಲಾಯಿಸುತ್ತಿದ್ದೇವೆ ಎಂದರು.
ಬಹಿರಂಗವಾಗಿಯೇ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ಗೆ ಮತಹಾಕುವಂತೆ ಪ್ರಚಾರ ಮಾಡಿ ಸೂಚಿಸಿದ್ದೇವೆ. ಮತದಾನ ಕಡಿಮೆಯಾದರೂ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಗೆಲುವು ಖಚಿತವಾಗಿದ್ದು, ನನ್ನ ಕ್ಷೇತ್ರ ನಾಗಮಂಗಲಕ್ಕೆ ಮತ್ತೊಮ್ಮೆ ಸಂಸದ ಸ್ಥಾನ ಸಿಗುತ್ತಿರುವುದು ಸಂತಸ ಎಂದು ಹೇಳಿದರು.
Next Story