ಬೆಳಕಿನ ಹಬ್ಬ ಎಲ್ಲರಿಗೂ ಒಳಿತನ್ನು ತರಲಿ: ಸಚಿವ ದೇಶಪಾಂಡೆ
ಬೆಂಗಳೂರು, ನ. 4: ಬೆಳಕಿನ ಹಬ್ಬವಾದ ದೀಪಾವಳಿ ನಾಡಿನ ಜನತೆಗೆ ಎಲ್ಲ ಬಗೆಯ ಒಳಿತನ್ನೂ ತರಲಿ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹಾರೈಸಿದ್ದಾರೆ.
ದೀಪಾವಳಿಯು ಅಂಧಕಾರದಿಂದ ತೇಜಸ್ಸಿನ ಕಡೆಗೆ, ಕತ್ತಲಿನಿಂದ ಬೆಳಕಿನ ಕಡೆಗೆ ಮುಂದಡಿ ಇಡುತ್ತೇವೆಂಬ ಸಂಕಲ್ಪವನ್ನು ನೆನಪಿಸುವ ಆಚರಣೆಯಾಗಿದೆ. ಹಿರಿಯರು ಮತ್ತು ಕಿರಿಯರೆಲ್ಲರೂ ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲಿ ಎಂದು ದೇಶಪಾಂಡೆಯವರು ಶುಭಾಶಯಗಳನ್ನು ಸಲ್ಲಿಸಿದ್ದಾರೆ.
Next Story